
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾಗೂ ಜಿಲ್ಲೆಯ ಅತಿ ದೊಡ್ಡ ಗ್ರಾಮವಾದ ಹೆಬ್ಬಾಲೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ 130 ವರ್ಷ ಹಳೆಯದಾದ ಹಾಗೂ ಜಿಲ್ಲೆಯಲ್ಲಿ ಅತಿ ಹೆಚ್ಚು ಶಿಕ್ಷಕರನ್ನು ಹೊಂದಿರುವ ಹೆಬ್ಬಾಲೆ ಗ್ರಾಮದ ಈ ಶಾಲೆಯ ಬನಶಂಕರಿ ಅಮ್ಮನವರ ಬಯಲು ರಂಗ ಮಂದಿರ ಮತ್ತು ಪ್ರೇಕ್ಷಕರ ಗ್ಯಾಲರಿಯನ್ನು20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೂತನವಾಗಿ ಶಾಲಾ ಮೈದಾನದಲ್ಲಿ ನಿರ್ಮಾಣಗೊಂಡಿರುವ ಈ ರಂಗ ಮಂದಿರವನ್ನು ನಾಳೆ ಅಂದರೆ ಶುಕ್ರವಾರ 11:00 ಗಂಟೆಗೆ ಶಾಲಾ ಆವರಣದಲ್ಲಿ ಉದ್ಘಾಟನಾ ಶುಭ ಸಮಾರಂಭ ನಡೆಯಲಿದೆ.
ಉದ್ಘಾಟನೆ ಮತ್ತು ಅಧ್ಯಕ್ಷತೆ ಕಾರ್ಯಕ್ರಮ ಶ್ರೀಯುತ ಡಾಕ್ಟರ್ ಮಂತರ್ ಗೌಡ ಮಡಿಕೇರಿ ಶಾಸಕರು ವಹಿಸಲಿದ್ದು, ಮುಖ್ಯಅತಿಥಿಯಾಗಿ ಎಸ್ಡಿಎಂಸಿ ಅಧ್ಯಕ್ಷರಾದ ಪ್ರದೀಪ್ ಕುಮಾರ್, ಗೌರವಾನ್ವಿತ ಅತಿಥಿಗಳು ಶ್ರೀಯುತ ವಿಪಿ ಶಶಿಧರ್, ಹೆಚ್ಎಸ್ ರಾಜಶೇಖರ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ವಹಿಸಲಿದ್ದಾರೆ. ಸಮಾರಂಭಕ್ಕೆ ಪೋಷಕರು, ಹಳೆ ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಆತ್ಮೀಯ ಸವಿನಯ ಕರೆಯೋಲೆ ನೀಡಲಾಗಿದೆ ಎಂದು ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರದೀಪ ಅವರು ಚಾನೆಲ್ ಗೆ ಮನವಿ ಮಾಡಿದ್ದಾರೆ.
- ಕರುನಾಡ ಕಂದ ಸುದ್ದಿ




















