ಕೊಪ್ಪಳ:ಗಣೇಶ್ ನಗರದ ಆಶ್ರಯ ಕಾಲೋನಿಯಲ್ಲಿ ವಾಸವಿದ್ದ ಶೆಡ್ ನ ಜಾಗವನ್ನು ಈಗ ಬೇರೆಯವರ ಹೆಸರಿಗೆ ನೋಂದಾಯಿಸಲಾಗಿದೆ ಎಂದು ಅಂಗವಿಕಲ ಚನ್ನಬಸಪ್ಪ ಯಲಿಗಾರ ಇಲ್ಲಿನ ಜಿಲ್ಲಾಡಳಿತ ಭವನದ ಮುಂಬಾಗದಲ್ಲಿ ವಿವಿಧ ಸಂಘಟನೆಗಳ ಜೊತೆಗೂಡಿ ನಡೆಸುತ್ತಿರುವ ಪ್ರತಿಭಟನೆ ಈಗ 41 ದಿನ ಪೂರ್ಣಗೊಳಿಸಿದೆ.
“ಖಾಲಿ ನಿವೇಶನ ಸಂಖ್ಯೆ 52ರಲ್ಲಿ ಶೆಡ್ ಹಾಕಿಕೊಂಡು ಎರಡೂವರೆ ದಶಕಗಳಿಂದ ಕುಟುಂಬ ಸಮೇತವಾಗಿ ವಾಸಿಸುತ್ತಿದ್ದೇನೆ.ಕೊಪ್ಪಳ ನಗರಸಭೆ 2019ರಲ್ಲಿ ಮೂಲ ದಾಖಲೆ ತಂದುಕೊಡಿ ಎಂದು ಕೊಟ್ಟ ನೋಟಿಸ್ ಗೆ ಉತ್ತರ ನೀಡಿ ಅದೇ ನಿವೇಶನ ಮಂಜೂರು ಮಾಡುವಂತೆ ಮನವಿ ಮಾಡಿದ್ದೆ ಮನವಿ ಕಡೆಗಣಿಸಿ ಶಾಸಕರು ತಮ್ಮದೇ ಸಮುದಾಯದ ಮಹಿಳೆಯೊಬ್ಬರ ಹೆಸರಿಗೆ ನಿವೇಶನ ಮಂಜೂರು ಮಾಡಿದ್ದಾರೆ” ಎಂದು ಚನ್ನಬಸಪ್ಪ ಯಲಿಗಾರ ಆರೋಪಿಸಿದರು .
‘ನನ್ನ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಲವು ಪ್ರತಿಭಟನೆ ನಡೆಸುತ್ತಿದ್ದರೂ ಯಾವ ಅಧಿಕಾರಿಗಳು ಕಿವಿಗೊಡುತ್ತಿಲ್ಲ,ಖಾಲಿ ಇರುವ ನಿವೇಶನ ನನ್ನ ಹೆಸರಿಗೆ ಮಂಜೂರು ಮಾಡಿಕೊಡಬೇಕು’ ಎಂದರು .
ನಗರ ಸಭೆಯವರು ರಸ್ತೆಗೆ ಹೊಂದಿಕೊಂಡಿರುವ ಲಕ್ಷಾಂತರ ರೂಪಾಯಿ ಬೆಲೆಬಾಳುವ ಜಾಗವನ್ನು ಲಂಚ ಪಡೆದು ಮತ್ತು ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕಳೆದ ವರ್ಷ ವ್ಯಕ್ತಿಯೊಬ್ಬರಿಗೆ ನೀಡಿದ್ದಾರೆ,ಲಂಚ ಕೊಟ್ಟು ನಿವೇಶನ ಪಡೆದ ವ್ಯಕ್ತಿ ಚನ್ನಬಸಪ್ಪ ಕುಟುಂಬದ ಮೇಲೆ ದೌರ್ಜನ್ಯ ಮಾಡಿ ಅರ್ಧದಷ್ಟು ಶೆಡ್ ಕಿತ್ತು ಹಾಕಲಾಗಿದೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ ಎಂದು ರೈತ ಸಂಘದ ರಾಜ್ಯಾಧ್ಯಕ್ಷರು,ಕಾರ್ಯದರ್ಶಿಗಳು ಆರೋಪಿಸಿದ್ದಾರೆ.
ವರದಿ-ಮಲ್ಲಿಕ್ ಕೊಪ್ಪಳ




















