ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಹಸಿರು ಬಳಗದದಿಂದ ವಿಭಿನ್ನವಾಗಿ ಹೊಸ ವರ್ಷದ ಆಚರಣೆ ನಡೆಯಿತು
ಹನುಮೇಶ ಭಾವಿಕಟ್ಟಿಯವರು ಮಾತನಾಡಿ ಹೊಸ ವರ್ಷವನ್ನು ಎಲ್ಲರೂ ವಿಧ ವಿಧವಾಗಿ ಆಚರಿಸುತ್ತಾರೆ ನಮ್ಮ ಹಸಿರು ಬಳಗದ ಯೋಚನೆ ಗಿಡಮರಗಳು ಅಲಂಕಾರಿಕವಾಗಿ ಕಾಣಬೇಕು ಎಂದು ಈ ಗಿಡಮರಗಳ ಬಳ್ಳಿಗಳಿಗೆ ಬಣ್ಣ ಸುಣ್ಣ ಹಚ್ಚುವುದರಿಂದ ಅದರ ಆಯಸ್ಸು ಹೆಚ್ಚಾಗುತ್ತದೆ ಹಾಗೂ ಕೆಲ ಹುಳುಗಳು ಗಿಡವನ್ನು ಗೊತ್ತಾಗದ ರೀತಿಯಲ್ಲಿ ಹಾಳು ಮಾಡುತ್ತಿದ್ದಲ್ಲಿ ತಕ್ಷಣ ಗೊತ್ತಾಗುತ್ತದೆ ಅದೆ ರೀತಿ ಇದರಿಂದ ಗಿಡಮರಗಳ ರಕ್ಷಣೆ ಆಗುತ್ತದೆ ಗಿಡಮರಗಳು ಅಲಂಕಾರವಾಗಿ ಚೆನ್ನಾಗಿ ಕಾಣುತ್ತವೆ
ಎಂದರು ಈ ಸಂದರ್ಭದಲ್ಲಿ ಶರಣಪ್ಪ , ಬಸವರಾಜ , ರಾಘವೇಂದ್ರ , ಗುರುರಾಜ ಹಾಗೂ ಹನುಮೇಶ ಭಾವಿಕಟ್ಟಿ ಹಾಜರಿದ್ದರು




















