ಧಾರವಾಡ : ಸ್ವಾಭಿಮಾನಿ ಸಮರ ಜಗತ್ತಿನ ಮೊದಲ ರಕ್ತಕ್ರಾಂತಿ ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸ್ನಾತಕೋತ್ತರ ವಿದ್ಯಾರ್ಥಿನಿಲಯದಲ್ಲಿ ವಿದ್ಯಾರ್ಥಿನಿಯರು ಕೇಕ್ ಕತ್ತರಿಸಿ ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ರಾತ್ರಿ 12 ಗಂಟೆಗೆ ವಿಜಯೋತ್ಸವವನ್ನು ಆಚರಿಸಿ ದಲಿತ ಸೈನಿಕರಿಗೆ ನಮನಗಳನ್ನು ಸಲ್ಲಿಸಿದರು.
ಜಗತ್ತಿನ ಇತಿಹಾಸದಲ್ಲೇ ಹೆಣ್ಣು ಹೊನ್ನು ಮಣ್ಣು ಹಾಗೂ ಹಕ್ಕುಗಳಿಗಾಗಿ ಹೋರಾಟಗಳು ನಡೆದಿವೆ ಆದರೆ ಸ್ವಾಭಿಮಾನಕ್ಕಾಗಿ ಹೋರಾಟ ನಡೆದಿದ್ದರೆ ಅದು ಭೀಮಾ ಕೋರೆಗಾಂವ್ ಮಾತ್ರ. ಕೇವಲ 500 ದಲಿತ ಸೈನಿಕರು 28000 ಮರಾಠಾ ಪೇಶ್ವೇಗಳನ್ನು ರಣರಂಗದಲ್ಲಿ ಸದೆ ಬಡಿದರು ಕಾರಣ ಇದೊಂದು ಸ್ವಾಭಿಮಾನದ ಸಮರವಾಗಿದ್ದು ಇಂತಹ ಒಂದು ಘಟನೆ ಇಡೀ ಇತಿಹಾಸದಲ್ಲಿ ನಡೆದಿದ್ದು ಇಂತಹ ರೋಮಾಂಚನಕಾರಿ ರಕ್ತಕ್ರಾಂತಿ ಯುದ್ಧದ ವಿಜಯೋತ್ಸವವನ್ನು ನಾವಿಂದು ನೆನೆದು ದಲಿತ ಶೌರ್ಯ ಸಮರದ ಸೈನಿಕರಿಗೆ ನಮನಗಳನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ವಿದ್ಯಾರ್ಥಿನಿಯರು ಮಾತನಾಡಿದರು.
ಈ ವೇಳೆ ದಲಿತ ವಿದ್ಯಾರ್ಥಿ ಪರಿಷತ್ ನ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ದುರ್ಗಾ ಎಚ್, ಮಂಜುಳಾ, ಪವಿತ್ರಾ, ಪ್ರತಿಭಾ, ಲಕ್ಷ್ಮೀ, ಸ್ವೆತಾ, ದುರ್ಗಾ ಕೆ. ಟಿ.ಹಾಗೂ ಅಡುಗೆ ಸಹಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.




















