ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಹನೂರು : ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕ,ಆರ್ ನರೇಂದ್ರ ಅವರಿಂದ ಭೂಮಿ ಪೂಜೆ

ಹನೂರು ತಾಲ್ಲೂಕಿನ ಹಲಗಾಪುರ, ಶೆಟ್ಟಳ್ಳಿ, ಕುರಟ್ಟಿಹೊಸೂರು , ಭದ್ರಯ್ಯನ ಹಳ್ಳಿ, ಅರಬಗೆರೆ ಗ್ರಾಮಗಳಲ್ಲಿ ಸಿ ಸಿ ರಸ್ತೆ ಹಾಗೂ ಚರಂಡಿಗೆ ಶಾಸಕರ ಆರ್ ನರೇಂದ್ರ ಭೂಮಿ ಪೂಜೆ ನೆರೆವರಿಸಿ

ಬಳಿಕ ಮಾತನಾಡಿದ ಅವರು ಆರ್ .ಡಿ .ಪಿ .ಆರ್ ಇಲಾಖೆಯಡಿಯಲ್ಲಿ ಹಲಗಪುರ ಗ್ರಾಮದಲ್ಲಿ 20 ಲಕ್ಷ ರೂ ವೆಚ್ಚದ ಸಿಸಿ ರಸ್ತೆ, ಅರಬಗೆರೆಯಲ್ಲಿ 15 ಲಕ್ಷ ರೂ ವೆಚ್ಚದ ಸಿಸಿ ರಸ್ತೆ, ಶೆಟ್ಟಳ್ಳಿ ಯಲ್ಲಿ 15 ಲಕ್ಷ ರೂ ವೆಚ್ಚದ ಸಿ ಸಿ ರಸ್ತೆ, ಕುರಟ್ಟಿ ಹೊಸೂರು ಗ್ರಾಮದಲ್ಲಿ 15 ಲಕ್ಷ ರೂ ವೆಚ್ಚದ ಸಿಸಿ ರಸ್ತೆ, ನಿರ್ಮಾಣ ಹಾಗೂ ಅರಬಗೆರೆ ಮತ್ತು ಭದ್ರಯ್ಯನ ಹಳ್ಳಿ ಗ್ರಾಮದ ಆದಿ ಜಾಂಬವ ಬೀದಿಯಲ್ಲಿ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ ಮಾಡಿ, ನಿಗದಿತ ಅವಧಿಯೊಳಗೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗುಣಮಟ್ಟದ ಕಾಮಗಾರಿ ಯನ್ನು ಕೈಗೊಳ್ಳುವಂತೆ ಗುತ್ತಿಗೆದಾರರಿಗೆ ತಿಳಿಸಿದರು,

ಈ ಭಾಗದಲ್ಲಿ ಸುಮಾರು 65 ರಿಂದ 70 ಪರ್ಸೆಂಟ್ ಸಿಸಿ ರಸ್ತೆಗಳು ಮುಕ್ತಾಯ ಗೊಂಡಿವೆ, ಮುಂದಿನ ದಿನಗಳಲ್ಲಿ ಇನ್ನುಳಿದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದರು,

ಈ ಸಂದರ್ಭದಲ್ಲಿ ಜಿ .ಪಂ ಮಾಜಿ ಸದಸ್ಯ ಬಸವರಾಜು, ಗುತ್ತಿಗೆದಾರ ನಾಗರಾಜು, ಚಾಂದ್ ಪಾಷ, ಮಾಜಿ ತಾ, ಪಂ ಗೋವಿಂದ, ಚಾಮುಲ್ ನಿರ್ದೇಶಕ ತಾರಿಕ್, ಏ.ಇ.ಇ ಚಿಕ್ಕಲಿಂಗಯ್ಯ ಹಾಗೂ ಶೋಭಾ ಅಸಿಸ್ಟೆಂಟ್ ಎಂಜಿನಿಯರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ ಉಸ್ಮಾನ್ ಖಾನ್ ಬಂಡಳ್ಳಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ