ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸುರಪುರ ಕೆಇಬಿ ಅಧಿಕಾರಿಗಳು ಹಾಗೂ ಜಿಲ್ಲಾ ಕೆಇಬಿ ಅಧಿಕಾರಿಗಳಿಗೆ ಅಮಾನತು ಮಾಡಿ ಎಂದು ಚಿಗರಿಹಾಳ ಗ್ರಾಮಸ್ಥರ ಮನವಿ

ಯಾದಗಿರಿ:ಸುರಪುರ ತಾಲೂಕಿನ ಚಿಗರಿಹಾಳ ಗ್ರಾಮಸ್ಥರು ೨೯/೧೧/೨೦೨೨ ರಂದು ಪತ್ರಿಕೆಯಲ್ಲಿ ಮತ್ತು ಮಾಧ್ಯಮ ವರದಿ ಮಾಡಿದರು ಲಜ್ಜೆಗೇಡಿ ಅಧಿಕಾರಿಗಳು ಚಿಗರಿಹಾಳ ಗ್ರಾಮಸ್ಥರು ಮನವಿಗೆ ಸ್ಪಂದಿಸುತ್ತಿಲ್ಲ ಇಂತಹ ಅಧಿಕಾರಿಗಳಿಗೆ ಕೂಡಲೇ ಅಮಾನತು ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರೆ.
ಚಿಗರಿಹಾಳ ಗ್ರಾಮಸ್ಥರು ಆತಂಕದಲ್ಲಿ ಜೀವನ ನಡುಸುತ್ತಿದ್ದರು ಇತ್ತ ಕಡೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು. ಮನ ಕರಗದ ಕೆಇಬಿ ಅಧಿಕಾರಿಗಳಿಗೆ ನಾಚಿಕೆ ಯಾಗಬೇಕು. ಚಿಗರಿಹಾಳ ಗ್ರಾಮಕ್ಕೆ ಕಂಬಗಳು ಹಾಕಿದೆ ಐದು ವರ್ಷಗಳಿಂದ ವಿದ್ಯುತ್ ಬಿಲ್ ಪಡೆಯುತ್ತಿದ್ದು. ಈ ಕೆಇಬಿ ಅಧಿಕಾರಿಗಳಿಗೆ ಯಾವ ನೈತಿಕತೆ ಇದೆ ಸರ್ ನಿವೇ ಹೇಳಿ ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.
ಜಿಲ್ಲಾ ಕೆಇಬಿ ಅಧಿಕಾರಿಗಳಾದ ರಾಘವೇಂದ್ರ ಸರ್ ಅವರಿಗೇ ೫/೧೨/ ೨೦೨೨ ರಂದು ಅವರಿಗೂ ಕೂಡ ಮನವಿ ಮಾಡಿದರು ಕೂಡ ಸ್ಪಂದಿಸುತ್ತಿಲ್ಲ. ಇಂತಹಾ ಅಧಿಕಾರಿಗಳಿಗೆ ಕೂಡಲೇ ಅಮಾನತು ಮಾಡಬೇಕು. ಮುಂದಿನ ದಿನಗಳಲ್ಲಿ ಅಧಿಕಾರಿಗಳು ನಮ್ಮ ಮನವಿಗೆ ಸ್ಪಂದಿಸದಿದ್ದರೆ ಇಡೀ ಚಿಗರಿಹಾಳ ಗ್ರಾಮಸ್ಥರು ಕೆಇಬಿ ಆಫೀಸಿಗೆ ಮುತ್ತಿಗೆ ಹಾಕುತ್ತವೆ ಎಂದು ಹೇಳಿದರು.
ಗ್ರಾಮದ ಮುಖಂಡರಾದ ಬಸವರಾಜ ಮಾಪಳ್ಳಿ , ಗೋವಿಂದಪ್ಪ, ಪರಮಣ್ಣ, ಮೈನುದೀನ್, ನಿಂಗಪ್ಪ ಕವಲಿ , ಮಾದೇವಿ, ಹಣಮಂತ್ರಾಯ, ಸಿದ್ದರಾಮ, ಪೀಡಪ್ಪ, ತಿಪ್ಪವ್ವ , ಮಹಿಬೂಬಿ, ಚಾದಂಬಿ, ಹಣಮಂತಿ, ನಿಂಗಮ್ಮ, ಚಿಗರಿಹಾಳ ಗ್ರಾಮಸ್ಥರು ಭಾಗವಹಿಸಿದ್ದರು.

ವರದಿ:ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ