ಕೊಪ್ಪಳ/ ಕುಕನೂರ : ತಾಲೂಕಿನ ಭಟಪನಹಳ್ಳಿಯ ಶ್ರೀ ಭೀಮಾಂಬಿಕಾದೇವಿಯ ಪಂಚಕಳಸದ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಶ್ರೀ ಭೀಮಾಂಬಿಕಾದೇವಿಯ ಮಠದಲ್ಲಿ 29 ನೇ ಜಾತ್ರಾ ಮಹೋತ್ಸವ ಅಂಗವಾಗಿ ಪುರಾಣ ಕಾರ್ಯಕ್ರಮ ಸಾಗಿ ಬಂದವು. ಪ್ರತಿದಿನ ಬೆಳಗಿನ ಜಾವ ಶ್ರೀ ಭೀಮಾಂಬಿಕಾದೇವಿಗೆ ಪೂಜಾ ವಿಧಾನಗಳು ಜರುಗಿ ಮಧ್ಯಾಹ್ನ 12.30 ಕ್ಕೆ ಸಾಮೂಹಿಕ ವಿವಾಹಗಳು ಜರುಗಿದವು.
ಕಾಗಿನೆಲೆಯ ಜಗದ್ಗುರು ನಿರಂಜನಾನಂದಾಪುರಿ ಸ್ವಾಮೀಜಿ, ಶಿರಹಟ್ಟಿಯ ಫಕೀರಸ್ವಾಮೀಜಿ, ಕುಕನೂರಿನ ಡಾ.ಮಹಾದೇವ ಸ್ವಾಮೀಜಿ, ಯಲಬುರ್ಗಾದ ಬಸವಲಿಂಗೇಶ್ವರ ಸ್ವಾಮೀಜಿ ,ಮಂಗಳೂರಿನ ಸಿದ್ದಲಿಂಗ ಸ್ವಾಮೀಜಿ, ತುರ್ವಿಹಾಳದ ಮಾದಯ್ಯ ಸ್ವಾಮೀಜಿ, ದಮ್ಮೂರಿನ ಹನುಮಂತಪ್ಪಜ್ಜ ಧರ್ಮರ, ಮಲ್ಲನಕೇರಿಯ ಚೆನ್ನಬಸವ ಸ್ವಾಮೀಜಿ, ಕಂಪಸಾಗರದ ನಾಗಭೂಷಣ ಸ್ವಾಮೀಜಿ ಸೇರಿದಂತೆ ಗುರು ಹಿರಿಯರು ನವ ದಂಪತಿಗಳಿಗೆ ಶುಭಕೋರಿದರು.
ಈ ವೇಳೆ ಭಟಪನಹಳ್ಳಿಯ ಶ್ರೀ ಭೀಮಾಂಬಿಕಾದೇವಿಯ ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಗುರು ಹಿರಿಯರು,ರೈತರು ಹಾಗು ಕೊಪ್ಪಳ, ಬಳ್ಳಾರಿ, ಗದಗ, ಧಾರವಾಡ ,ಹುಬ್ಬಳ್ಳಿ ಜಿಲ್ಲೆಯ ಸುತ್ತಮುತ್ತಲಿನ ಭಕ್ತರು ಭಾಗವಹಿಸಿದ್ದರು. ನಂತರ ಅನ್ನಸಂತರ್ಪಣೆ ಜರುಗಿತು.
- ಕರುನಾಡ ಕಂದ ಪತ್ರಿಕೆ




















