
ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಮಾಜ ಒಳ್ಳೆಯ ಸಂಸ್ಕೃತಿ ಹೊಂದಿದೆ.
ಕರ್ನಾಟಕದಲ್ಲಿ ವೀರಶೈವ ಜಂಗಮ ಸಮಾಜದ ಅಭಿವೃದ್ಧಿಗಾಗಿ ಹಲವು ಸಮಿತಿಗಳು ಮತ್ತು ಸಂಘಗಳು ಕಾರ್ಯನಿರ್ವಹಿಸುತ್ತಿವೆ. ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಮಿತಿ’ಯ ಒಂದು ಸಮಾಜಕ್ಕೆ ಸೀಮಿತವಲ್ಲ ಎಲ್ಲಾ ಸಾಮಾಜಕ್ಕೆ ಸಾಕ್ಷಿಯಾಗಿದೆ.
ವೀರಶೈವ ಜಂಗಮ ಕ್ಷೇಮಾಭಿವೃದ್ಧಿ ಸಮಿತಿ ಸಂಘ ಉದ್ಘಾಟನಾ ಸಮಾರಂಭವು ಜಂಗಮ ಸಮುದಾಯದ ಏಳಿಗೆ, ಸಂಸ್ಕೃತಿ ರಕ್ಷಣೆ ಮತ್ತು ಒಗ್ಗಟ್ಟನ್ನು ಬಲಪಡಿಸುವ ಉದ್ದೇಶದಿಂದ ಆಯೋಜಿಸಲಾಗುವ ಒಂದು ಮಹತ್ವದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮವಾಗಿದೆ.
ಸಮುದಾಯದ ವಿವಿಧ ಕಾರ್ಯಕ್ರಮಗಳು ಮತ್ತು ಉದ್ಘಾಟನೆಗಳ ಸಾಮಾನ್ಯ ವಿವರ ಹಾಗೂ ಪ್ರಮುಖ
ಉದ್ಘಾಟನಾ ಸಮಾರಂಭದ ಪ್ರಮುಖ ಉದ್ದೇಶಗಳು
ಸಂಸ್ಕೃತಿ ಮತ್ತು ತತ್ವ ಜಾಗೃತಿ: ವೀರಶೈವ ಲಿಂಗಾಯತ ಪರಂಪರೆ, ಶರಣರ ವಚನ ಸಾಹಿತ್ಯ ಮತ್ತು ಲಿಂಗಪೂಜೆಯ ಮಹತ್ವವನ್ನು ಜನರಲ್ಲಿ ಹಾಗೂ ಯುವ ಪೀಳಿಗೆಯಲ್ಲಿ ಮೂಡಿಸುವುದು.
ಜಂಗಮ ಸಮಾಜದ ಬಂಧುಗಳನ್ನು ಒಂದೇ ವೇದಿಕೆಯಡಿ ತಂದು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಗೆ ಶ್ರಮಿಸುವುದು
ಮಹಿಳಾ ಮತ್ತು ಯುವ ಘಟಕಗಳ ಸಬಲೀಕರಣ ಸಮಾಜದ ಮಹಿಳೆಯರಿಗೆ ಮತ್ತು ಯುವಕರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಿ, ಸಂಘಟನೆಯನ್ನು ಮತ್ತಷ್ಟು ಚುರುಕುಗೊಳಿಸುವುದು.
ಪ್ರತಿಭಾ ಪುರಸ್ಕಾರ ಮತ್ತು ಸಹಾಯ ಹಸ್ತ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವುದು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ನೆರವಾಗುವುದು ಎಂದರು.
ದಿವ್ಯ ಸಾನಿಧ್ಯ -ಶ್ರೀ ಷ. ಬ್ರ. ಶಿವ ಶಿದ್ಧರಾಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ
ಶ್ರೀ ಷ ಬ್ರ ಅಭಿನವ. ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ
ನಾಗಯ್ಯ ಚರಂತಿಮಠ, ಎಸ್ ಎಮ್ ರುದ್ರಯ್ಯನವರು
ಬಸಯ್ಯ ಹಿರೇಮಠ, ರಾಚಯ್ಯ ವಾರಿಕಲ್ಮಠ,
ವೀರಭದ್ರಯ್ಯ ಚಿಕ್ಕಮಠ,
ಎಸ್ ಕೆ ಕಾಯಕಮಠ,
ಶಿವಯೋಗಿ ವಿಭೂತಿಮಠ, ಉದಯ ಪುರಾಣಿಕಮಠ,
ನಾಗರತ್ನಾ ಬೆನ್ನೂರಮಠ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.




















