ನಿರಂತರ ಯಾನ
ಬಾಳೆಂಬ ಕಡಲಲಿ
ಉಬ್ಬು ತಬ್ಬುಗಳ ಹೋರಾಟ
ಆಗಾಗ ಶೀತಲ ಸಮರ
ನುಗ್ಗಿ ಸಾಗುವ ದೊಂಬರಾಟ
ಸಂತಸದ ಬೆಳಕಿಗೆ ಹಪಹಪಿಸುವ
ತ್ಯಾಗದ ಹರಿಗೋಲು ಹಾಕುತ
ವಿರಸದ ಮೊನೆ ತಾಗದಂತೆ
ಒಲವಿನ ಗುರಿ ತಲುಪಲು
ಅಹಮಿಕೆಯ ತೊಡುಗೆ ಕಳಚಿ ಬಿಡು.
ನಿಲ್ಲದ ದಿನಮಾನಕೆ
ಅರಿವಿನ ದಿಕ್ಸೂಚಿಯಲಿ
ಅಡೆ ತಡೆಗಳ ಮಂಜುಗಡ್ಡೆಗಳ ಸರಿಸಿ
ವಿಷ ತುಂಬುವ ರಂದ್ರಗಳ ಮಚ್ಚುತ
ನೆಮ್ಮದಿಯ ಜೀವನಕೆ ನಿಲ್ಲದ ಪಯಣ.
- ರೇಷ್ಮಾ ಕಂದಕೂರ.




















